ಪುತ್ತೂರು : ನಗರಸಭೆ, ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್ ಸಹಯೋಗದಲ್ಲಿ ಸಂಸಾರ ಜೋಡುಮಾರ್ಗತ ತಂಡದಿಂದ ಘನತ್ಯಾಜ್ಯ ವಿಲೇವಾರಿ ಹಾಗೂ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿಯ ಬೀದಿ ನಾಟಕವನ್ನು ನಗರದ ವಿವಿಧೆಡೆಗಳಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಈ ನಿಟ್ಟಿನಲ್ಲಿ ಇತ್ತ ಮಧ್ಯಾಹ್ನ ನಗರದ ಕಿಲ್ಲೆ ಮೈದಾನದ ಸಂತೆಯಲ್ಲಿ ಆಯೋಜಿಸಲಾಗಿದ್ದ ಜಾಗೃತಿಯ ಕುರಿತಾದ ಬೀದಿ ನಾಟಕದಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರ ಗಮನವನ್ನು ಸೆಳೆಯಲಾಯಿತು.

ಮೌನೇಶ್ ವಿಶ್ವಕರ್ಮ ಅವರ ನೇತೃತ್ವದಲ್ಲಿ ತ್ಯಾಜ್ಯಗಳ ಬೇರ್ಪಡಿಸುವಿಕೆ, ಸಮರ್ಪಕ ವಿಲೇವಾರಿ, ವ್ಯಾಪಕ ಪ್ಲಾಸ್ಟಿಕ್ ಬಳಕೆಯಿಂದ ಸಮಾಜದಲ್ಲಿ ಉಂಟಾಗುತ್ತಿರುವ ಸಮಸ್ಯೆ, ಸಂಕಷ್ಟಗಳ ಕುರಿತು ಗಮನ ಸೆಳೆಯುವ ನಾಟಕವನ್ನು ಪ್ರಸ್ತುತಪಡಿಸಲಾಯಿತು.

ಈ ಸಂದರ್ಭ ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ ಡಾ. ರಾಜೇಶ್ ಬೆಜ್ಜಂಗಳ, ನಗರಸಭಾ ಸದಸ್ಯ ಯೂಸುಫ್, ಎಂಜಿಯರ್ಗಳಾದ ದುರ್ಗಾ ಪ್ರಸಾದ್, ರಾಮಚಂದ್ರ, ಶ್ವೇತಾ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.
