ಬಂಟ್ವಾಳ: ಬಾಳ್ತಿಲ ಗ್ರಾಮದ ಮೊಗರ್ನಾಡು ಸಾವಿರ ಸೀಮೆಯ ಕಾರಣಿಕ ಪ್ರಸಿದ್ಧ ಉಳ್ಳಾಲ್ತಿ ಅಮ್ಮ ಮತ್ತು ಅಜ್ವರ ದೈವಂಗಳು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಕೇಶವ ಸಪಲ್ಯ ಕಾಂಪ್ರಬೈಲು ಆಯ್ಕೆಯಾಗಿದ್ದಾರೆ.

ಸಮಿತಿಯ ಇತರೆ ಸದಸ್ಯರಾಗಿ ಪ್ರೇಮನಾಥ ಶೆಟ್ಟಿ, ಚಿದಾನಂದ ಕಟ್ಟದಮೂಡು, ಚಂದ್ರಶೇಖರ ಮೂಲ್ಯ, ನಾರಾಯಣ ಪೂಜಾರಿ, ಜಗದೀಶ ಕಿನ್ಯನಬೈಲು, ಸಂದೇಶ ಶೆಟ್ಟಿ ಕಂಟಿಕ, ಉಷಾ ನಾಯ್ಕ ಗೋಳಿದಡಿ ಹಾಗೂ ಹರಿಣಾಕ್ಷಿ ಕೋರ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.




