Breaking
13 May 2026, Wed

ಕೆರೆಯಲ್ಲಿ ಮುಳುಗಿ ಓರ್ವ ಸಾವು, ಇನ್ನೋರ್ವ ಗಂಭೀರ

ಕಾಸರಗೋಡು: ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟು ಇನ್ನೋರ್ವ ಗಂಭೀರಗೊಂಡ ಘಟನೆ ಕಾಸರಗೋಡುವಿನ ತಳಂಗರೆಯ ಕೆರೆಯಲ್ಲಿ ನಡೆದಿದ್ದು, ಪ್ರಕರಣ ಜೂ.18 ರಂದು ನಡೆದಿದೆ.

ಬೆಂಗಳೂರು ಡಿ.ಜೆ ಹಳ್ಳಿಯ ಫೈಝಾನ್(22) ಮೃತ ದುರ್ದೈವಿ. ಗಂಭೀರ ಸ್ಥಿತಿಯಲ್ಲಿದರುವ ಫೈಝಾನ್ ಸಹೋದರ ಸಕ್ಲೈನ್ (20)ನನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ತಳಂಗರೆ ಮಾಲಿಕ್ ದಿನಾರ್ ಮಸೀದಿಗೆ ಆಗಮಿಸಿದ್ದ ಇವರಿಬ್ಬರು ಮಸೀದಿ ಹಿಂಬಾಗದ ಕೆರೆಗೆ ಸ್ನಾನಕ್ಕೆಂದು ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಸಕ್ಲೈನ್ ನನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಫೈಝಾನ್ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.

ಝಿಯಾರತ್ ಗಾಗಿ ಬೆಂಗಳೂರಿನಿಂದ 11 ಮಂದಿಯ ತಂಡವು ಮಂಗಳವಾರ ಮಾಲಿಕ್ ದಿನಾರ್ ಮಸೀದಿಗೆ ಆಗಮಿಸಿತ್ತು. ಇವರೆಲ್ಲರೂ ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಮರಳುವವರಿದ್ದರು.

ಘಟನಾ ಸ್ಥೃಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಇಬ್ಬರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಫೈಝಾನ್ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *