ಉಡುಪಿ: ಮಾದಕ ವಸ್ತು ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಧಾರಾವಾಡ ಕೇಂದ್ರ ಕಾರಾಗೃಹದಲ್ಲಿ ಬಂಧಿಸಲಾಗಿದೆ.

ಆರೋಪಿಗಳು ಕೊಳಲಗಿರಿ ಉಪ್ಪೂರಿನ ಕೃಷ್ಣ ಆಚಾರಿ(43) ಮತ್ತು ಕೇಳಾರ್ಕಳಬೆಟ್ಟಿನ ಅಬ್ದುಲ್ ಜಬ್ಬಾರ್(27) ಎಂದು ಗುರುತಿಸಲಾಗಿದೆ.
ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ತಡೆಗಟ್ಟುವ ಉದ್ದೇಶದಿಂದ ಪದೇ ಪದೇ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ಹಲವು ಠಾಣೆಯಲ್ಲಿ ಈ ಆರೋಪಿಗಳ ಮೇಲೆ ಗಂಭೀರ ಆರೋಪಗಳು ಧೃಡಪಟ್ಟಿದ್ದು, ಇವರ ವಿರುದ್ದ ಪಿಟ್ ಎನ್.ಡಿ.ಪಿ.ಎಸ್ ಕಾಯಿದೆಯನ್ನು ದಾಖಲಿಸಿಲಾಗಿದೆ.



