Breaking
22 Mar 2026, Sun

ಸುಳ್ಯ : ಕೃಷಿ ತೋಟಕ್ಕೆ ಒಂಟಿ ಸಲಗ ದಾಳಿ – ಕೃಷಿ ನಾಶ

ಸುಳ್ಯ: ಮರ್ಕಂಜ ಭಾಗದ ಪಾರೆಪ್ಪಾಡಿ, ಉಬ್ರಾಳ, ಮಾವಜಿ ಭಾಗದ ಕೃಷಿ ತೋಟಕ್ಕೆ ಒಂಟಿ ಸಲಗವೊಂದು ದಾಳಿ ನಡೆಸಿ ಅಪಾರ ಪ್ರಾಮಾಣದ ಕೃಷಿ ನಾಶ ಮಾಡಿದ ಘಟನೆ ನಡೆದಿದೆ.

ರಾತ್ರಿ ಪ್ರಶಾಂತ್ ರೈ ಪಾರೆಪ್ಪಾಡಿ, ಹಿಮಕರ ಮಾವಜಿಯವರ ತೋಟಕ್ಕೆ ದಾಳಿ ನಡೆಸಿ ಅಪಾರ ಪ್ರಾಮಾಣದ ಕೃಷಿ ನಾಶ ಮಾಡಿತ್ತು.

ಸುಮಾರು ಒಂದು ತಿಂಗಳಿನಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಮಾವಾಜಿ ಕೇಶವ ಗೌಡ, ಸದಾಶಿವ ಗೌಡ, ಮೋನಪ್ಪ ಗೌಡ, ಪಾರ್ವತಿ, ರುಕ್ಕಿಯ್ಯ ಗೌಡ ಮಿತ್ತಪೇರಲು, ಶಶಿಧರ ಗೊಳ್ಯಾಡಿ ರಾಮೇಶ್ವರ ಹಾಗೂ ಉಬ್ರಾಳ ಭಾಗದಲ್ಲಿ ಅಪಾರ ಕೃಷಿ ನಾಶ ಮಾಡಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *