ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನದಲ್ಲಿ ಎಲ್ಲಾ ಬಗೆಯ ಪ್ಲಾಸ್ಟಿಕ್ ಹಾಗೂ ನೀರಿನ ಬಾಟಲ್ ಗಳ ಮಾರಾಟಕ್ಕೆ ಸಂಪೂರ್ಣ ನಿಷೇಧ ಮಾಡಲು ಸರ್ಕಾರ ಆದೇಶಿಸಿದೆ

ಈ ಕುರಿತು ವಿಕಾಸೌಧದಲ್ಲಿ ಜೂ. 09 ರಂದು ಮಜುರಾಯಿ ಮತ್ತು ಧರ್ಮದಾಯ ಇಲಾಖೆ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದರು.

ಆಗಸ್ಟ್ 15ರವರೆಗೆ ದೇವಾಸ್ಥಾನದ ಜಾಗದಲ್ಲಿ ಇರುವಂತಹ ಅಂಗಡಿಗಳಿಗೆ ಗಡುವು ನೀಡಲಾಗಿದ್ದು. ಅಗಸ್ಟ್ 15 ರ ನಂತರ ದೇವಾಸ್ಥಾನದ ಜಾಗದಲ್ಲಿ ಅಂಗಡಿ ಮಳಿಗೆಗಳಿರುವ ಇರುವ ಕಾರಣ ಯಾವುದೇ ಪ್ಲಾಸ್ಟಿಕ್ ಬಳಸುವಂತಿಲ್ಲ ಮಾರಾಟ ಮಾಡುವಂತಿಲ್ಲ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಕಡ್ಡಾಯವಾಗಿ ಜಾರಿಗೆಯಾಗಲಿದೆ ಎಂದು ಹೇಳಿದರು.
