ಪುತ್ತೂರು: ಕರಾವಳಿಯಲ್ಲಿ ಗುಡುಗು ಸಿಡಿಲಿನ ಜೊತೆಗೆ ಮಳೆಯ ಆರ್ಭಟ ಜೋರಾಗಿದ್ದು ಪುತ್ತೂರು ತಾಲೂಕಿನ ಹಲವೆಡೆ ತಡೆಗೋಡೆ ಕುಸಿತವಾದ ಘಟನೆ ಮೇ.25 ರಂದು ನಡೆದಿದೆ.

ಬೆಳಗ್ಗೆಯಿಂದಲೇ ಬಿಟ್ಟು ಬಿಡದೇ ಮಳೆ ಸುರಿತಾ ಇದ್ದು ಮಳೆಯ ಅಬ್ಬರಕ್ಕೆ ಪುತ್ತೂರು ನಗರಸಭೆ ಹಾಗೂ ಸಮುದಾಯ ಭವನದ ತಡೆಗೋಡೆ, ಬಪ್ಪಳಿಗೆ ಸಮೀಪ ತಡೆಗೋಡೆ ಕುಸಿತ ಉಂಟಾಗಿದೆ.
ತಡೆಗೋಡೆ ಕುಸಿದ ಪರಿಣಾಮ ಎಲ್ಲಿಯೂ ಹಾನಿ ಉಂಟಾಗಿಲ್ಲ .



