Breaking
29 Jun 2025, Sun

ಭಾರೀ ಮಳೆಗೆ ಹೊಳೆಯಂತಾದ ಸುಳ್ಯದ ಚೆನ್ನಕೇಶವ ದೇವಸ್ಥಾನದ ರಸ್ತೆ

ಸುಳ್ಯ: ಧಿಡಿರ್ ಸುರಿದ ಮಳೆಗೆ ರಸ್ತೆಯಲ್ಲೇ ನೀರು ನಿಂತು ಹೊಳೆಯಂತಾಗಿ ನೀರು ಉಕ್ಕಿ ಹರಿದ ಘಟನೆ ತಾಲೂಕಿನ ದೇವಸ್ಥಾನವೊಂದರ ಬಳಿ ನಡೆದಿದೆ.

ಸುಳ್ಯದ ಚೆನ್ನಕೇಶವ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ದಿಢೀರ್ ಸುರಿದ ಮಳೆಗೆ ನೀರೆಲ್ಲ ರಸ್ತೆ ಮೇಲೆ ಹರಿದು ರಸ್ತೆ ಹೊಳೆಯಂತಾಗಿ ಪ್ರಯಾಣಿಕರು ಪರದಡುವಂತಾಯಿತು.

ರಸ್ತೆ ಮೇಲೆ ನೀರು ಉಕ್ಕಿ ಹರಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಸಾರ್ವಜನಿಕರು ಪರದಡುವಂತಾಯಿತು.

Leave a Reply

Your email address will not be published. Required fields are marked *