ಪಾಕಿಸ್ತಾನದ ವಿರುದ್ಧ ಭಾರತ ಜಲದಾಳಿ : ಪಾಕ್‌ ನಲ್ಲಿ ಪ್ರವಾಹ ಭೀತಿ!

ನವದೆಹಲಿ : ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಎಲ್ಲಾ ನದಿಗಳನ್ನು ಬಂದ್‌ ಮಾಡಿ ಪಾಕ್‌ ನಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗುವಂತೆ ಮಾಡಿತ್ತು. ಆದರೆ ಭಾರೀ ಮಳೆಯಿಂದ ಭಾರತದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಭಾರತವು ಸಲಾಲ್ನಿಂದ ಪಾಕಿಸ್ಥಾನಕ್ಕೆ ನೀರು ಬಿಡುಗಡೆ ಮಾಡಿದೆ.

ಚೆನಾಬ್ ನದಿಗೆ ನೀರು ಬಿಡುಗಡೆ ಮಾಡಿದ ಪರಿಣಾಮ ನೀರಿಲ್ಲದೆ ಬಳಲುತ್ತಿದ್ದ ಪಾಕಿಸ್ತಾನ ಇದೀಗ ಪ್ರವಾಹದ ಭೀತಿಗೆ ಒಳಗಾಗಿದೆ. ಸಲಾಲ್ನಿಂದ ಬಿಡುಗಡೆಯಾದ ನೀರು ಪಾಕಿಸ್ಥಾನಕ್ಕೆ ಹರಿಯುವಂತೆ ಮಾಡಲಾಗಿದ್ದು ಭಾರತದ ಪ್ರತೀಕಾರಕ್ಕೆ ಪಾಕ್‌ ಅಕ್ಷರಶಃ ನಡುಗಿದೆ.

ವಾಯುದಾಳಿ, ನೌಕಾದಾಳಿ ಬಳಿಕ ಈಗ ಭಾರತ ಪಾಕಿಸ್ತಾನದ ವಿರುದ್ಧ ಜಲದಾಳಿ ನಡೆಸಿದೆ.

Leave a Reply

Your email address will not be published. Required fields are marked *