ಬಂಟ್ವಾಳ : ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ( ರಿ ) ಬಂಟ್ವಾಳ ಇದರ ಆಶ್ರಯದಲ್ಲಿ ದಿನಾಂಕ 14-04-2025ನೇ ಸೋಮವಾರದಂದು ಡಾ| ಬಿ. ಆರ್. ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆ ಪ್ರಯುಕ್ತ ಬಂಟ್ವಾಳ ಸರಕಾರಿ ಆಸ್ಪತ್ರೆ ಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವೈದ್ಯರಾದ ಸಮೀಕ್ಷಾ, ಶ್ರೀಮತಿ ವಾಣಿ ಕೆ. ಮತ್ತು ಸಿಬ್ಬಂದಿ ವರ್ಗ, ತಾಲೂಕು ಅಧ್ಯಕ್ಷರಾದ ಸಂತೋಷ್ ಭಂಡಾರಿಬೆಟ್ಟು, ಗೌರವಾಧ್ಯಕ್ಷರು ಧರ್ಣಪ್ಪ ಬಡಗಬೆಳ್ಳೂರು, ಗೌರವ ಸಲಹೆಗಾರರಾದ ರಾಜ ಚೆಂಡ್ತಿಮಾರ್, ಮೋಹನ್ ಬಡಗಬೆಳ್ಳೂರು, ಉಪಾಧ್ಯಕ್ಷರಾದ ಚಂದ್ರಹಾಸ್ ಅರ್ಬಿಗುಡ್ಡೆ, ಕೋಶಾಧಿಕಾರಿ ಜಯಂತಿ ವಾಮದಪದವು, ಸಂಘಟನ ಕಾರ್ಯದರ್ಶಿ ನಾರಾಯಣ ಬೊಂಡಲ, ಜಾನಕಿ ವಾಮದಪದವು ಉಪಸ್ಥಿತರಿದ್ದರು.







