ಸಿದ್ದಕಟ್ಟೆ: ಇಡೀ ದೇಶವೇ ನಿರೀಕ್ಷಿಸುತಿದ್ದ ಕೇಂದ್ರ ಬಜೆಟ್ -2025 ಇಂದು ಮಂಡನೆಯಾಗಿದ್ದು, ಇದು ವಿಕಸಿತ ಭಾರತದ ಪರಿಕಲ್ಪನೆಯ ದೂರದೃಷ್ಠಿ ಕೇಂದ್ರ ಬಜೆಟ್ ಎಂದು ಸಿದ್ಧಕಟ್ಟೆ ವ್ಯವಸಾಯಿಕ ಸಹಕಾರಿ ಸಂಘ. ನಿ.ಅಧ್ಯಕ್ಷ ಪ್ರಭಾಕರ ಪ್ರಭು ಶ್ಲಾಘಸಿದರು.
“ಲಕ್ಷ ದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ, ಸೌರ ವಿದ್ಯುತ್ ಯೋಜನೆ ಜಾರಿ,ಮತ್ಸ್ಯ ಸಂಪದ ಯೋಜನೆ ಮೂಲಕ ಮೀನುಗಾರಿಕೆಗೆ ಪ್ರೋತ್ಸಾಹ, ಲಕ್ ಪತಿ ದಿದಿ ಯೋಜನೆ ಇನ್ನಷ್ಟು ಮಹಿಳೆಯರಿಗೆ ವಿಸ್ತಾರಣೆ,ಆಶಾ,ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮಾ ಯೋಜನೆ,ವಿಮಾನ ನಿಲ್ದಾಣಗಳ ಹೆಚ್ಚಳ,ವಂದೇ ಭಾರತ ರೈಲ್ವೇ ಉನ್ನತೀಕರಣ,ಗೋವುಗಳ ಕಾಯಿಬಾಯಿ ರೋಗಕ್ಕೆ ನಿಯಂತ್ರಣ ಕ್ರಮ ,ರಾಜ್ಯಗಳಿಗೆ ಬಡ್ಡಿ ರಹಿತ ದೀರ್ಘವಾಧಿ ಸಾಲ ನೀಡುವುದರೊಂದಿಗೆ ವಿಕಸಿತ ಭಾರತ ಸಾಕಾರಗೊಳ್ಳಲು ಈ ಬಜೆಟ್ ಪೂರಕವಾಗಿದೆ” ಎಂದು ಅವರು ತಿಳಿಸಿದರು.




