ಕಲ್ಲಡ್ಕ : ಯುವವಾಹಿನಿ (ರಿ.) ಮಾಣಿ ಘಟಕದ 2026-27ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್ ಪೂಜಾರಿ ಕೊಡಾಜೆ ಆಯ್ಕೆಯಾಗಿದ್ದಾರೆ.

ಪ್ರಥಮ ಉಪಾಧ್ಯಕ್ಷರಾಗಿ ಸುಜಿತ್ ಅಂಚನ್ ಮಾಣಿ, ಎರಡನೇ ಉಪಾಧ್ಯಕ್ಷರಾಗಿ ಸತೀಶ್ ಕೊಪ್ಪರಿಗೆ, ಕಾರ್ಯದರ್ಶಿಯಾಗಿ ವಿಶ್ವನಾಥ ಉರ್ದಿಲ, ಜತೆ ಕಾರ್ಯದರ್ಶಿಯಾಗಿ ಶಶಿಪ್ರಭಾ ಮಿತ್ತೂರು, ಕೋಶಾಧಿಕಾರಿಯಾಗಿ ತ್ರಿವೇಣಿ ರಮೇಶ್ ಮುಜಲ, ಸಾಂಸ್ಕೃತಿಕ ನಿರ್ದೇಶಕರಾಗಿ ಕೃಪಾನ್ ಪುತ್ತೂರು, ನಾರಾಯಣ ಗುರು ತತ್ವ ನಿರ್ದೇಶಕರಾಗಿ ಶ್ರೀಧರ್ ಮುಜಲ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಸತೀಶ್ ಮುರುವ, ಸಾಹಿತ್ಯ ಮತ್ತು ಕಲೆ ನಿರ್ದೇಶಕರಾಗಿ ರಾಜೇಶ್ ಕೋಟ್ಯಾನ್, ಕ್ರೀಡಾ ಕಾರ್ಯದರ್ಶಿಯಾಗಿ ಸಂದೇಶ್ ಕಡೇಶ್ವಾಲ್ಯ,
ಆರೋಗ್ಯ ನಿರ್ದೇಶಕರಾಗಿ ರತಿ ಸುರ್ಲಾಜೆ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಕೇಶವ ಬರಿಮಾರ್, ಸಮಾಜ ಸೇವಾ ನಿರ್ದೇಶಕರಾಗಿ ಸುರೇಶ್ ಬಾಕಿಲ, ಪ್ರಚಾರ ನಿರ್ದೇಶಕರಾಗಿ ಚರಣ್ ಜೆ ಅನಂತಾಡಿ, ಮಹಿಳಾ ನಿರ್ದೇಶಕರಾಗಿ ಪುಷ್ಪಶ್ರೀ ನಾಗೇಶ್, ವಿದ್ಯಾರ್ಥಿ ಸಂಘಟನೆ ನಿರ್ದೇಶಕರುಗಳಾಗಿ ಯಶಸ್ವಿನಿ, ಶ್ರೇಯ, ಭವಿಷ್ಯ ಬಾಕಿಲ,ಸಂಘಟನಾ ಕಾರ್ಯದರ್ಶಿಗಳಾಗಿ ಅನಂತಾಡಿಗೆ ಸೀತಾಲಕ್ಷ್ಮಿ, ಸುಜೀತ್ ಬಾಕಿಲ, ಮಾಣಿಗೆ ಸ್ಮಿತಾ ಹಳೀರ, ಗಂಗಾಧರ್ ಮಾಣಿ ಬರಿಮಾರ್ ಗೆ ಸಾಯಿ ಪ್ರಣಾಮ್, ಭರತ್ ಕೇವ, ರಾಮಣ್ಣ,
ನೆಟ್ಲಾ ಮೂಡ್ನೂರುಗೆ ಪ್ರಸಾದ್ ಮಿತ್ತಕೋಡಿ, ಮೋಹನ್ ಮುಜಲ,ಪೆರಾಜೆಗೆ ಲೋಹಿತ್ ಮಡಲ, ಸುಕೇಶ್ ಬಡೇಕೋಡಿ ಕೆದಿಲಕ್ಕೆ ಬಾಲಕೃಷ್ಣ ಕೆರೆಕೋಡಿ, ನಿತಿನ್ ಅಂಗರಾಜೆ, ಇಡ್ಕಿದುಗೆ ನವೀನ್ ಸೂರ್ಯ, ರೇಖಾ ಇಡ್ಕಿದು, ಬಿಳಿಯೂರುಗೆ ವಿಕ್ರಮ್ ಬಿಳಿಯೂರು, ಚೇತನ್ ಮಲ್ಲಡ್ಕ, ಪೆರ್ನೆಗೆ ಅಮಿತಾ ಪೆರ್ನೆ, ಶುಭ ಪೆರ್ನೆ,ಕಡೇಶ್ವಾಲ್ಯಕ್ಕೆ ಯಶೋಧ, ಶಿವಾನಿ, ಸಲಹೆಗಾರರಾಗಿ ಲೋಕನಾಥ್ ತಿಮರಾಜೆರವರನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಮಾ. 29 ನೇ ಆದಿತ್ಯವಾರ ಸಂಜೆ 7:00 ಗಂಟೆಗೆ ಸರಿಯಾಗಿ ನಕ್ಷತ್ರ ಅಡಿಟೋರಿಯಂ ಕೊಡಾಜೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







