ಬಂಟ್ವಾಳ: ಸಜೀಪ ಮಾಗಣೆಯ ಶ್ರೀ ಮಿತ್ತಮಜಲು ಕ್ಷೇತ್ರದಲ್ಲಿ ಶ್ರೀ ಸುದರ್ಶನ ಹೋಮವು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಸಜೀಪ ಗುತ್ತುಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈತನೇ ನಾರಣ ಆಳ್ವ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿವೇಕಶೆಟ್ಟಿ ನಗ್ರೀಗುತ್ತು, ಪಾಲೆಮಂಟಪ ಸಂಸಾರ, ದೇವಿಪ್ರಸಾದ್ ಪೂಂಜ, ಬಿಜಂದಾರು ಗುತ್ತು ಶಿವರಾಮ ಭಂಡಾರಿ, ನಗ್ರೀಗುತ್ತು ಜಯ ರಾಮ ಶೆಟ್ಟಿ, ಎಸ್ ಶ್ರೀಕಾಂತ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ರತ್ನಾಕರ, ಶಿವಪ್ರಸಾದ್ ಶೆಟ್ಟಿ, ಶುಭಪ್ರಸಾದ್, ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ, ಕುಂಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ. ಮೊದಲಾದವರು ಉಪಸ್ಥಿತರಿದ್ದರು










