Breaking
9 May 2026, Sat

ರಥಸಪ್ತಮಿ ಅಂಗವಾಗಿ ಸಜೀಪ ನಡುವಿನ ನಾಲ್ಕೈತಾಯ ದೈವಸ್ಥಾನದಲ್ಲಿ ಭಜನಾ ಮಹೋತ್ಸವ

ಬಂಟ್ವಾಳ: ಸಜೀಪ ನಡುವಿನ ಶ್ರೀ ನಾಲ್ಕೈತಾಯ ದೈವಸ್ಥಾನದಲ್ಲಿ ರಥಸಪ್ತಮಿಯ ಪರ್ವಕಾಲದ ಅಂಗವಾಗಿ ಜ. 25 ರಂದು ಅರ್ಧ ಏಕಾಹ ಭಜನಾ ಮಹೋತ್ಸವವು ದೀಪ ಬೆಳಗುವ ಮೂಲಕ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿಯಾನೆ ಕಾಳಪ್ಪ ಶೆಟ್ಟಿ, ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ, ಕುಂಜ್ಞ ಪೂಜಾರಿ, ಭಜನಾ ಸಮಿತಿಯ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *