ಬಂಟ್ವಾಳ : ತಾಲೂಕಿನ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚ್ ಸಮೀಪದ ಅಂಗನವಾಡಿ ಕೇಂದ್ರಕ್ಕೆ ಮರದ ‘ಪೋಡಿಯಂ ಹಸ್ತಾಂತರ’ ಕಾರ್ಯಕ್ರಮವು ಡಿ . 5 ರಂದು ನಡೆಯಿತು.
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಮಾಜಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ರಾಮಚಂದ್ರ ಶೆಟ್ಟಿಗಾರ್, ಕೋಶಾಧಿಕಾರಿ ಅರುಣ್ ಮಾಡ್ತಾ, ಸದಸ್ಯರಾದ ರೊನಾಲ್ಡ್ ಮೊರಾಸ್, ರಾಜೇಶ ಶೆಟ್ಟಿ ಕೊನೆರೊಟ್ಟು, ಶಿಕ್ಷಕಿ ಸರಿತಾ ಶೆಟ್ಟಿ, ಪ್ರಮುಖರಾದ ರೋಶನ್, ರಮೇಶ ಆಚಾರ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





