Breaking
22 Mar 2026, Sun

ಬೋಳಂತೂರು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಕೂಸಪ್ಪ ಮಾಸ್ಟರ್ ಪ್ರಭುಗಳ ಬೆಟ್ಟು ಆಯ್ಕೆ

ಕಲ್ಲಡ್ಕ : ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ ಇದರ ಬೋಳಂತೂರು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಕೂಸಪ್ಪ ಮಾಸ್ಟರ್ ಪ್ರಭುಗಳ ಬೆಟ್ಟು, ಉಪಾಧ್ಯಕ್ಷರಾಗಿ ಚೆನ್ನಪ್ಪ ಪೂಜಾರಿ ಗುಂಡಿಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಪ್ರಸಾದ್ ಗಾಣದ ಬೆಟ್ಟು , ಜತೆ ಕಾರ್ಯದರ್ಶಿಯಾಗಿ ಭಾಸ್ಕರ್ ಕೊಕ್ಕಪುಣಿ, ಕಿರಣ್ ಪ್ರಭುಗಳ ಬೆಟ್ಟು, ಕೋಶಾಧಿಕಾರಿಯಾಗಿ ಸಂಜೀವ ಪೂಜಾರಿ ಮಾಡ ದಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಸಾದ್ ಗುಡ್ಡೆಮಾರ್, ಚಂದ್ರಶೇಖರ್ ಪೂಜಾರಿ ಮಾಡದಡಿ, ಅಕ್ಷಿತ್ ಕುಲ್ಯಾರ್, ಸದಸ್ಯರುಗಳಾಗಿ ಧನಂಜಯ ಗುಂಡಿಮಜಲು, ಚಂದ್ರಶೇಖರ್, ರಜತ್, ಧರ್ಣಪ್ಪ ಪೂಜಾರಿ, ನವೀನ, ಶ್ರೀನಿವಾಸ, ಗೌರವ ಸಲಹೆಗಾರರಾಗಿ ಆನಂದ ಪೂಜಾರಿ ಪ್ರಭುಗಳ ಬೆಟ್ಟು, ನಾರಾಯಣ ಪೂಜಾರಿ ಉತ್ತಮ ನಗರ, ಕೃಷ್ಣಪ್ಪ ಪೂಜಾರಿ ಗುಂಡಿಮಜಲು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಲ್ಲವ ಸಂಘ(ರಿ.) ಕಲ್ಲಡ್ಕ ವಲಯ , ನಿಯೋಜಿತ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ, ನಿಯೋಜಿತ ಕೋಶಾಧಿಕಾರಿ ಕಿಶೋರ್ ಕಟ್ಟೆಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *