ಬಂಟ್ವಾಳ: ಪಾಣೆಮಂಗಳೂರು ನರಿಕೊಂಬುವಿನ ಶ್ರೀ ಕ್ಷೇತ್ರವಾದ ಶ್ರೀ ನಾರಿ ಕುಂಬೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರ , ನಮಕ , ಚಮಕ , ಗಣಪತಿ ಸೂಕ್ತ, ರುದ್ರ ಸೂಕ್ತ , ದೇವಿ ಸೂಕ್ತ, ಸೌರ ಸೂಕ್ತ, ಮನ್ಯೂ ಸೂಕ್ತ , ಅಂಬ್ರ ಣಿ ಸೂಕ್ತ, ಮಂತ್ರಪುಷ್ಪ, ಪಠಿಸಲಾಯಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ , ಎ ರವಿ ಶಂಕರ ಮೈಯ್ಯ, ದೇವಾಲಯ ಅರ್ಚಕ ಗಣೇಶ್ ಮಯ್ಯ, ಶಂಕರನಾರಾಯಣ ರಾವ್ ಪತ್ತು ಮಡಿ, ಕೆ ರಮೇಶ್ ಹೊಳ್ಳ, ಎಂ ಜಯರಾಮ ಮಯ್ಯ, ಎಂ ಶಾಂತರಾಮ ರಾವ್, ವಿಶಾಲ್ ಹೆಗ್ಗಡೆ, ಧನೇಶ್ವರ ರಾವ್, ರಾಮಚಂದ್ರಮಯ್ಯ, ಚಂದ್ರಮೋಹನರಾವ್, ಮಿಥುನ್ ರಾವ್ ಕೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.





