ಬಂಟ್ವಾಳ: ನಂದಾವರ ಚಿಕ್ಕ ಮೇಳ ತನ್ನ 2025 ನೇ ಸಾಲಿನ ಮಳೆಗಾಲದ ಮನೆ ಮನೆಗೆ ಯಕ್ಷಗಾನ ಸಮಾರೋಪವು ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನ ದಲ್ಲಿ ನ. 11 ರಂದು ಶ್ರೀ ದೇವರ ಸೇವೆಯಾಟದೊಂದಿಗೆ ಸಂಪನ್ನಗೊಂಡಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ, ದೇವಾಲಯದ ಪ್ರಧಾನ ಅರ್ಚಕ ಮಹೇಶ್ ಕುಮಾರ್ ಭಟ್, ಚಿಕ್ಕಮೇಳದ ಸಂಚಾಲಕ ಭಾಸ್ಕರ್ ಪೂಜಾರಿ, ಸರಪಾಡಿ ಹಾಗೂ ಕಲಾವಿದರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮನೆಮನೆ ಯಕ್ಷಗಾನದಿಂದ ಸಂಗ್ರಹವಾದ ರೂಪಾಯಿ 28,885 ನಗದನ್ನು ಶ್ರೀ ದೇವಳಕ್ಕೆಹಸ್ತಾಂತರ ಮಾಡಲಾಯಿತು.





