Breaking
22 Mar 2026, Sun

ಬೆಳ್ತಂಗಡಿ, ಹುಣ್ಸೆಕಟ್ಟೆ, ಕಳಿಯ ಹಾಗೂ ಕೊಯ್ಯೂರು ಗ್ರಾಮಗಳ ಪ್ರಯಾಣಿಕರ ಬೇಡಿಕೆಯ ಸರ್ಕಾರಿ ಬಸ್ ಸಂಚಾರ ಪ್ರಾರಂಭ- ಮನವಿಗೆ ಸ್ಪಂದಿಸಿ ಬೇಡಿಕೆ ಈಡೇರಿಸಿದ ಶಾಸಕರಾದ ಹರೀಶ್ ಪೂಂಜರವರಿಗೆ ಆ ಭಾಗದ ನಾಗರಿಕರಿಂದ ಅಭಿನಂದನೆ

ಬೆಳ್ತಂಗಡಿ: ತಾಲೂಕಿನ ಹುಣ್ಸೆಕಟ್ಟೆ, ಕಳಿಯ ಹಾಗೂ ಕೊಯ್ಯೂರು ಗ್ರಾಮಗಳ ಸಾರ್ವಜನಿಕರ/ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳನ್ನು ಕೆ.ಎಸ್.ಆರ್.ಟಿ.ಸಿ ನಿಗಮದ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಅವಶ್ಯ ಸಮಯಕ್ಕೆ ಬಸ್ ಗಳ ರೂಟ್ ಸೇವೆಯನ್ನು ಪ್ರಾರಂಭಿಸುವ ಕುರಿತು ಸೂಚನೆ ನೀಡಲಾಗಿತ್ತು.

ಈ ನಿಟ್ಟನಲ್ಲಿ ಗುರುವಾರದಿಂದ ಹುಣ್ಸೆಕಟ್ಟೆಯಿಂದ ಗೇರುಕಟ್ಟೆ ಮಾರ್ಗವಾಗಿ ಪರಪ್ಪು ಕೊಯ್ಯೂರು ಬಸ್ ಸಂಚಾರ ಆರಂಭಗೊಂಡಿದೆ.

ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಬೇಡಿಕೆಯನ್ನು ಈಡೇರಿಸಿದ ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜರವರಿಗೆ ಆ ಭಾಗದ ನಾಗರಿಕರು ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *