ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕೆಂಪು ಮುರಕಲ್ಲು(ಇಟ್ಟಿಗೆ) ಹಾಗೂ ಮರಳು ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವ ಕುರಿತು ಬಿಜೆಪಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಇಂದು ( ಜು.30) ಮನವಿ ಸಲ್ಲಿಸಿತು.ಈ ವೇಳೆ ದಕ್ಷಿಣ ಕನ್ನಡದ ಲೋಕಸಭಾ ಕ್ಷೇತ್ರದ ಸಂಸದರು ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಡಬಿದಿರೆ ಕ್ಷೇತ್ರದ ಉಮಾನಾಥ ಕೋಟ್ಯಾನ್ ,ಮಂಗಳೂರು ದಕ್ಷಿಣ ಶಾಸಕರು ವೇದವ್ಯಾಸ ಕಾಮತ್, ಬೆಳ್ತಂಗಡಿ ಕ್ಷೇತ್ರ ಶಾಸಕರು ಹರೀಶ್ ಪೂಂಜಾ, ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಪ್ರತಾಪ್ ಸಿಂಹ ನಾಯಕ್, ಕರ್ನಾಟಕ ವಿಧಾನ ಪರಿಷತ್ ಶಾಸಕರು ಕಿಶೋರ್ ಕುಮಾರ್, ಸುಳ್ಯ ಶಾಸಕರು ಭಾಗಿರಥಿ ಮುರುಳ್ಯ, ಬಂಟ್ವಾಳ ಕ್ಷೇತ್ರ ಶಾಸಕರು ರಾಜೇಶ್ ನಾಯ್ಕ್ , ಮಂಗಳೂರು ಉತ್ತರ ಶಾಸಕರು ಡಾ| ಭರತ್ ಶೆಟ್ಟಿ ವೈ, ಬಿಜೆಪಿ ದ.ಕ ಜಿಲ್ಲಾಧ್ಯಕ್ಷರು ಸತೀಶ್ ಕುಂಪಲ ಉಪಸ್ಥಿತರಿದ್ದರು.




