Breaking
20 Sep 2026, Sun

ನರಿಕೊಂಬು : ‘ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ರಕ್ತದಾನ ಶಿಬಿರ’

ಬಂಟ್ವಾಳ : ನರಿಕೊಂಬು ಗ್ರಾಮದ ಓಂ ಶ್ರೀ ಗೆಳೆಯರ ಬಳಗದ ವತಿಯಿಂದ ಮಂಗಳಾದೇವಿ ಲಯನ್ಸ್ ಕ್ಲಬ್ ಸಹಿತ ಬಿ.ಸಿ.ರೋಡು ಸಿಟಿ ಮತ್ತು ಲೊರೆಟ್ಟೊಹಿಲ್ಸ್ ಹಾಗೂ ಮೊಡಂಕಾಪು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ‘ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ರಕ್ತದಾನ ಶಿಬಿರ’ ಕಾರ್ಯಕ್ರಮವು ಭಾನುವಾರ ನಡೆಯಿತು.

ಈ ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾ.ಸುಬ್ರಹ್ಮಣ್ಯ ಟಿ.ಉದ್ಘಾಟಿಸಿದರು. ಅಂಚೆ ಜೀವ ವಿಮೆ ಬಗ್ಗೆ ಗುರುಪ್ರಸಾದ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಿನೇಶ ನೆಲ್ಲ್ಲಿಗುಡ್ಡೆ, ಪ್ರಮುಖರಾದ ಸಂತೋಷ್ ಪೂಂಜ, ಕೆ.ಪದ್ಮನಾಭ ರೈ, ವಿಜಯ ಫೆರ್ನಾಂಡಿಸ್, ಇಲ್ಯಾಸ್ ಸ್ಯಾಂಕ್ಟಿಸ್, ಸತೀಶ್ ಕುಮಾರ್, ದಿವಾಕರ ಶೆಟ್ಟಿ, ಉಮೇಶ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *