ಬಂಟ್ವಾಳ: ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜು.24ರಂದು ಆಟಿ ಅಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ ಮತ್ತು ದೇವರಿಗೆ ವಿಶೇಷ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ವೀರೇಂದ್ರ ಅಮೀನ್ ತಿಳಿಸಿದ್ದಾರೆ.

ಬೃಹತ್ ಗಾತ್ರದ ಬಂಡೆಗಳಿಂದ ಆವೃತವಾದ ಗಿರಿಧಾಮದಲ್ಲಿ ಆಕರ್ಷಕ ಶಿವಾಲಯ ಮತ್ತು ಪಾರ್ವತಿ ದೇವಾಲಯ ಹಾಗೂ ಕೆಳಭಾಗದಲ್ಲಿ ರಥಬೀದಿ ಬಳಿ ಪಾಂಡವರು ನಿರ್ಮಿಸಿದ್ದಾರೆ ಎಂಬ ಪ್ರತೀತಿ ಹೊಂದಿರುವ ವಿಶಾಲವಾದ ಗದಾ ತೀರ್ಥಕೆರೆ ಇಲ್ಲಿದೆ.
ಆ ದಿನ ಬೆಳಿಗ್ಗೆ ಮಧ್ವ ಓಂಕಾರ ಫ್ರೆಂಡ್ಸ್ ಸೇರಿದಂತೆ ಓಂಕಾರ ಮಹಿಳಾ ಘಟಕ ಮತ್ತು ಬೆಂಗತ್ತೋಡಿ ಓಂಕಾರ ಶ್ರೀ ಶಾರದಾ ಭಜನಾ ಮಂದಿರ ಇದರ ವತಿಯಿಂದ ಹಾಳೆ ಮರದ ಕೆತ್ತೆ ಕಶಾಯ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.



