Breaking
13 May 2026, Wed

ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಬೆಳಾಲಿನ ಯುವತಿ

ಬೆಳ್ತಂಗಡಿ: ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲುವಿನಲ್ಲಿ ಜು.11 ರಂದು ನಡೆದಿದೆ.

ಮೃತ ಯುವತಿಯನ್ನು ಇಲ್ಲಿನ ಕುಕ್ಕೊಟ್ಟು ನಿವಾಸಿಯಾಗಿರುವ ನಾಗೇಶ್ ಎಂಬವರ ಮಗಳು ವೀಣಾ ಎಂದು ಗುರುತಿಸಲಾಗಿದೆ.

ಈಕೆಯ ಪಾರ್ಥೀವ ಶರೀರ ಕೆರೆಯೊಂದರಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ವೀಣಾ ಮೇ.10, 2025ರಂದು ಈಕೆ ನಾಪತ್ತೆಯಾಗಿದ್ದಾಳೆ ಎಂಬ ದೂರು ಬಂದ ಹಿನ್ನಲೆ ಪೊಲೀಸರು ಪ್ರಕಟಣೆ ಹೊರಡಿಸಿದ್ದರು.

ಆ ನಂತರ ಆಕೆ ಪತ್ತೆಯಾಗಿದ್ದರು. ಇಂದು ಆಕೆಯ ಶವ ಕೆರೆಯಲ್ಲಿ ಪತ್ತೆಯಾಗಿದ್ದು ಪೊಲೀಸರು ತನಿಖೆ ಮುಂದುವೆರೆಸಿದ್ದಾರೆ.

Leave a Reply

Your email address will not be published. Required fields are marked *