ದಕ್ಷಿಣ ಕನ್ನಡದ ಹೆಸರನ್ನು “ಮಂಗಳೂರು ಜಿಲ್ಲೆ” ಎಂದು ಮರುನಾಮಕರಣ ಗೊಳಿಸುವಂತೆ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಗೆ ವಿಜ್ಞಾಪಿಸಿದ ಶಾಸಕ ಹರೀಶ್ ಪೂಂಜ

ಮಂಗಳೂರು: ಕಳೆದ ಕೆಲ ದಿನಗಳಿಂದ ಕರಾವಳಿಯದ್ಯಾoತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು “ಮಂಗಳೂರು ಜಿಲ್ಲೆ” ಎಂದು ಮರುನಾಮಕರಣ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ತುಳುನಾಡಿನ ಸಮಸ್ತರ ಒಕ್ಕೊರಲ ಆಗ್ರಹವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಎನ್ನುವ ಹೆಸರನ್ನು ದೇವಿ ಮಂಗಳಾಂಬಿಕೆಯ ಹೆಸರಿನಿಂದ ಪ್ರೇರಿತವಾಗಿರುವ “ಮಂಗಳೂರು” ಎನ್ನುವ ಹೆಸರನ್ನು ಮರುನಾಮಕರಣ ಗೊಳಿಸುವಂತೆ ದಿಶಾ ಸಮಿತಿಯಿಂದ ನಿರ್ಣಯ ಮಾಡಿ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡುವಂತೆ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯ ಸಮಿತಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ವಿಜ್ಞಾಪಿಸಿದರು.

Leave a Reply

Your email address will not be published. Required fields are marked *