ಮಂಗಳೂರು: ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ನಿಗೂಢ ಸಾವು ಆತಂಕ ಉಂಟುಮಾಡಿದೆ.

ಕೇವಲ ಒಂದು ವಾರದಲ್ಲಿ ಒಂಬತ್ತು ಪ್ರಾಣಿಗಳು ಮೃತಪಟ್ಟಿದ್ದು, 2 ಕೃಷ್ಣಮೃಗ, 5 ಪುನುಗು ಬೆಕ್ಕು, 1 ಬಿಳಿ ಗೂಬೆ ಮತ್ತು 1 ಮಲಬಾರ್ ದೈತ್ಯ ಅಳಿಲು ಸೇರಿವೆ.

ಇತ್ತೀಚೆಗೆ ಉದ್ಯಾನವನದೊಳಗೆ ನೀರು ನುಗ್ಗಿ ಕಂಪೌಂಡ್ ಕುಸಿತವಾಗಿದ್ದು, ಪ್ರಾಣಿಗಳಿಗೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಕ ಭುವನ್ ದೇವಾಡಿಗ ಅವರು ಸೆಂಟ್ರಲ್ ಝೂ ಅಥಾರಿಟಿಗೆ ದೂರು ನೀಡಿದ್ದರು. ಇದರ ಅನ್ವಯ ಮುಖ್ಯ ವನ್ಯಜೀವಿ ವಾರ್ಡನ್ಗೆ ಶೋಕಾಸ್ ನೋಟಿಸ್ ಜಾರಿಯಾಯಿತು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಅವರು ಸ್ಥಳ ಪರಿಶೀಲನೆ ನಡೆಸಿದ್ದು, ಕೆಲವು ಸಾವಿಗೆ ವಯಸ್ಸು ಹಾಗೂ ಹವಾಮಾನ ಕಾರಣವಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಮಲಬಾರ್ ದೈತ್ಯ ಅಳಿಲಿಗೆ 16 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾರಣದಿಂದ ಸತ್ತಿರಬಹುದು. ಹೆಣ್ಣು ಪುನುಗು ಬೆಕ್ಕುಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದ್ದು, ಜಿಂಕೆಗಳ ಸಾವು ಸಂತಾನೋತ್ಪತ್ತಿ ಸಮಸ್ಯೆ ಹೊಂದಿರುವ ಶಂಕೆಯಿದೆ. ಸದ್ಯ ಉದ್ಯಾನವನದಲ್ಲಿ 1,250ಕ್ಕೂ ಹೆಚ್ಚು ಪ್ರಾಣಿಗಳು ಹಾಗೂ ಪಕ್ಷಿಗಳು ಇದ್ದು, ಪರೀಕ್ಷಾ ವರದಿ ನಂತರ ಸ್ಪಷ್ಟನೆ ನೀಡಿದೆ.



