ಮಂಗಳೂರು : ಎಕ್ಕಾರು ಗ್ರಾಮದ ನೀರುಡೆಯ ನಿವಾಸಿ ತಿಲಕ್ ರಾಜ್ ಶೆಟ್ಟಿ(29). ಜೂನ್ 29 ರಂದು ಬೆಳಗ್ಗೆ ಕೆಲಸಕ್ಕೆಂದು ಮನೆ ಬಿಟ್ಟು ಹೋದವ ಮನೆಯವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಮೊಬೈಲ್ ರಿಸೀವ್ ಮಾಡ್ತಾ ಇಲ್ಲಎಂದು ಹತ್ತಿರದ ಪೋಲೀಸ್ ಸ್ಟೇಷನ್ ಗೆ ದೂರು ನೀಡಲಾಗಿದ್ದು, ನಾಪತ್ತೆ ಪ್ರಕರಣ ದಾಖಲಾಗಿತ್ತು.

ಅದರಂತೆ ಜು 1 ರಂದು ಬೆಳಿಗ್ಗೆ ಪಲಿಮಾರು ಗ್ರಾಮದ ಅವರಾಲು ಎಂಬಲ್ಲಿ ಶಾಂಭವಿ ನದಿಯಲ್ಲಿ ಮೃತರ ಶವ ಪತ್ತೆಯಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣವು ದಾಖಲಾಗಿದ್ದು ತನಿಖೆ ಮುಂದುವರಿದಿದೆ.




