Breaking
13 Jul 2025, Sun

ಕೋಟಿ ಗೀತಾ ಲೇಖನ ಯಜ್ಞ: ಶ್ರೀಕೃಷ್ಣ ಮಠದಲ್ಲಿ 5.30 ಗಂಟೆಗಳಲ್ಲಿ ಸಂಪೂರ್ಣ ಭಗವದ್ಗೀತೆ ಬರೆದು ದಾಖಲೆ ನಿರ್ಮಿಸಿದ ದಂಪತಿ

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ “ಕೋಟಿ ಗೀತಾ ಲೇಖನ ಯಜ್ಞ” ದಲ್ಲಿ ಬಿಜೆಪಿ ಒಬಿಸಿ ಮೋರ್ಚಾ, ಉಡುಪಿ ನಗರದ ಉಪಾಧ್ಯಕ್ಷ ಸುಶಾಂತ್ ಬ್ರಹ್ಮಾವರ ಅವರು ತಮ್ಮ ಪತ್ನಿ ಸಂಜನಾ ಅವರೊಂದಿಗೆ ಕೇವಲ 5 ಗಂಟೆ 30 ನಿಮಿಷಗಳಲ್ಲಿ ಸಂಪೂರ್ಣ ಭಗವದ್ಗೀತೆಯನ್ನು ಬರೆದು ದಾಖಲೆ ನಿರ್ಮಿಸಿದ್ದಾರೆ.

ಈ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಧಿಕೃತವಾಗಿ ಗುರುತಿಸಿದೆ.

ದಂಪತಿಗಳು ತಾವು ಪೂರ್ಣಗೊಳಿಸಿದ ಹಸ್ತಪ್ರತಿಯನ್ನು ಮಠದಲ್ಲಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳಿಗೆ ಸಮರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ್ ಕೊಡವೂರು, ಉಡುಪಿ ನಗರ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮೀಶ್ ಬಂಗೇರ ಮಲ್ಪೆ, ಬಿಜೆಪಿ ನಾಯಕ ಮಧುಕರ್ ಮುದ್ರಾಡಿ, ಎಪಿಎಂಸಿ ಅಧ್ಯಕ್ಷ ಸುಭಾಷಿತ್ ಕುಮಾರ್, ಮತ್ತು ಶಬರಿಮಲೆ ಅಯ್ಯಪ್ಪ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *