ಖಾಸಗಿ ಬಸ್ ನಲ್ಲಿ ಕೇರಳ ಮೂಲದ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ಪ್ರಯಾಣ : ಪೊಲೀಸರಿಂದ ತನಿಖೆ

ಸುಳ್ಯ: ಕೇರಳ ಮೂಲದ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನು ಖಾಸಗಿ ಬಸ್‌ನಲ್ಲಿ ಬೆಂಗಳೂರಿಗೆ ಒಟ್ಟಿಗೆ ಪ್ರಯಾಣಿಸುತ್ತಿದ್ದ ಮಾಹಿತಿಯನ್ನು ಪಡೆದು, ಭಜರಂಗದಳ ಕಾರ್ಯಕರ್ತರು ಕಾಯ೯ಪ್ರವೃತ್ತರಾಗಿದ್ದಾರೆ.

ಭಜರಂಗದಳ ಕಾರ್ಯಕರ್ತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಪೊಲೀಸರು ಬಸ್ಸನ್ನು ತಡೆದು ಇಬ್ಬರನ್ನೂ ವಿಚಾರಣೆ ನಡೆಸಿದ್ದಾರೆ.

ಅಧಿಕೃತ ವಿಚಾರಣೆಯ ಬಳಿಕ ಯುವತಿ ಹಾಗೂ ಯುವಕನಿಗೆ ಪುನಃ ಪ್ರಯಾಣ ಮುಂದುವರಿಸಲು ಅವಕಾಶ ನೀಡಲಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ವಿವಿಧ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *