ಬಂಟ್ವಾಳ: ತಾಲೂಕಿನ ಕರ್ಲ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನವೋದಯ ಯುವಕ ಮಂಡಲ(ರಿ) ಕರ್ಲ ಇದರ ವತಿಯಿಂದ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಇಂದು ಜೂನ್ ೨೦ ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ನವೋದಯ ಯುವಕ ಮಂಡಲ (ರಿ) ಅಧ್ಯಕ್ಷ ಯಶವಂತ್ ಕುಮಾರ್ ಕೋಡ್ಯೇಲು ಮತ್ತು ಕಾರ್ಯದರ್ಶಿ ತುಳಸಿಧರ ಸುವರ್ಣ ಕರ್ಲ ಅವರು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರು ರವಿ ಕೆ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಬೇಬಿ ಪೂಜಾರಿ ಕರ್ಲ ಇನ್ನಿತರರು ಉಪಸ್ಥಿತರಿದ್ದರು.


