ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ತಡೆದು ಕಂಕನಾಡಿ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಣ್ಣೂರು ಕಡೆಯಿಂದ ಬಂದ ವಾಹನವನ್ನು ಪಡೀಲ್ ಜಂಕ್ಷನ್ ಬಳಿಯ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದು ಈ ವೇಳೆ ಪಿಕಪ್ ನಲ್ಲಿ ಮರಳು ಕಂಡು ಬಂದಿದೆ.
ಪರವಾನಿಗೆ ಬಗ್ಗೆ ಚಾಲಕ ಮೊಹಮ್ಮದ್ ನಿಜಾಂ ಯಾನೇ ನಿಜ್ಜು ಬಳಿ ವಿಚಾರಿಸಿದಾಗ ಆತನಲ್ಲಿ ಯಾವುದೇ ಪರವಾನಿಗೆ ಇರಲಿಲ್ಲ. ಬಳಿಕ ವಿಚಾರಣೆ ವೇಳೆ ಅರ್ಕುಳ ಮೈದಾನದಿಂದ ಮರಳು ತುಂಬಿಸಿಕೊಂಡು ತಂದಿರುವುದಾಗಿ ತಿಳಿಸಿದ್ದಾನೆ.

ಪೊಲೀಸರು, ಆರೋಪಿ ಚಾಲಕ ಮೊಹಮ್ಮದ್ ನಿಜಾಂ ಸಹಿತ 4 ಲಕ್ಷ ರೂ. ಮೌಲ್ಯದ ಪಿಕಪ್ ವಾಹನ ಮತ್ತು 2,500 ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

