ಮಂಗಳೂರು: ಕ್ಷುಲಕ ಕಾರಣಕ್ಕೆ ಯುವಕನಿಗೆ ಚೂರಿ ಇರಿದು ಹಲ್ಲೆ ನಡೆಸಿರುವ ಘಟನೆ ನಗರದ ಯೆಯ್ಯಾಡಿಯಲ್ಲಿ (ಜೂ.06) ಮಧ್ಯಾಹ್ನ ನಡೆದಿದೆ.

ಒಂದು ತಿಂಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಬ್ರಿಜೇಶ್ ಶೆಟ್ಟಿ ಮತ್ತು ಕೌಶಿಕ್ ಮಧ್ಯೆ ಗಲಾಟೆ ನಡೆದಿದ್ದು ಗಲಾಟೆಯ ದ್ವೇಷದ ಹಿನ್ನಲೆ ನಿನ್ನೆ ಬ್ರಿಜೇಶ್ ಶೆಟ್ಟಿ ಹಾಗೂ ಗಣೇಶ್ ಬಿಜೈ, ಕೌಶಿಕ್ ಹೊಟ್ಟೆಯ ಭಾಗಕ್ಕೆ ಚೂರಿ ಇರಿದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಚೂರಿ ಇರಿತಕ್ಕೆ ಒಳಗಾದ ಕೌಶಿಕ್ ನ ಸ್ಥಿತಿ ಚಿಂತಾಜನಕವಾಗಿದೆ.

