Breaking
21 Mar 2026, Sat

ಓವರ್ ಟೆಕ್ ಧಾವಂತ:ಕಾಪುವಿನಲ್ಲಿ ಪಲ್ಟಿಯಾದ ಬಸ್ ನಾಲ್ವರು ಗಂಭೀರ,ಹಲವರಿಗೆ ಗಾಯ

ಉಡುಪಿ : ಖಾಸಗಿ ಎಕ್ಸ್ಪ್ರೆಸ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಉಡುಪಿಯ ಜಿಲ್ಲೆಯ ಕಾಪು ಸಮೀಪದ ಪೊಲಿಪು ಮಸೀದಿ ಬಳಿ ಮೇ.26 ರ ಸಂಜೆಯ ವೇಳೆ ನಡೆದಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಕೆಎಸ್ಆರ್ಟಿಸಿ ಬಸ್ ನ್ನು ಓವರ್ ಟೆಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಬಸ್ಸಿನಲ್ಲಿದ್ದ ನಾಲ್ವರಿಗೆ ಗಂಭೀರ ಪ್ರಮಾಣದ ಹಾಗೂ ಹಲವರಿಗೆ ಸಣ್ಣ ಪುಟ್ಟ ಗಾಯವಾಗಿದೆ.

ಗಾಯಾಳುಗಳನ್ನು ಉಡುಪಿ ಹಾಗೂ ಕಾಪುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *