Breaking
27 Jun 2025, Fri

ಹಿಂದೂ ಎಂದು ನಂಬಿಸಿ ಮದುವೆಯ ಭರವಸೆ ನೀಡಿ ವಂಚನೆ: ಆರೋಪಿಅರೆಸ್ಟ್: ಹಿಂದೂ ಸಂಘಟನೆಯಿಂದ ಪೊಲೀಸರ ಕಾರ್ಯಕ್ಕೆ ಶ್ಲಾಘನೆ

ಮಾಣಿಲ: ನಕಲಿ ಗುರುತಿನ ಚೀಟಿ ಹಿಡಿದುಕೊಂಡು ನಾನೂ ಹಿಂದೂ ಎಂದು ಕೊಡಗಿನ ಯುವತಿಯೋರ್ವಳನ್ನು ನಂಬಿಸಿ, ಮದುವೆಯಾಗುವೆ ಎಂದು ದೈಹಿಕ ಸಂಪರ್ಕ ಬೆಳೆಸಿ ನಂತರ ವಂಚನೆ ಹಾಗೂ ಅತ್ಯಾಚಾರವೆಸಗಿದ ಆರೋಪದಡಿ ವಿಟ್ಲ ತಾಲ್ಲೂಕಿನ ಮಾನಿಲ ಗ್ರಾಮದ ವಾಲ್ಟರ್ ಡಿಸೋಜ ಎಂಬಾತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ಕಾರ್ಯಾಚಾರಣೆ ನಡೆಸಿದ ಪೊಲೀಸರು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆಯ ವಿವರ:
ಆರೋಪಿಯು ಹಿಂದೂ ಯುವತಿಯ ಜೊತೆ 2016ರಿಂದ ನಕಲಿ ಗುರುತು ಪತ್ರಗಳ ಸಹಾಯದಿಂದ ಹೋಟೆಲ್‌ಗಳಲ್ಲಿ ದೈಹಿಕ ಸಂಪರ್ಕ ಹೊಂದಿದ್ದು ನಂತರ ಆರೋಪಿಯ ತಂಗಿಯ ಮುಖಾಂತರ ಅವನು ಹಿಂದೂ ಅಲ್ಲ, ಕ್ರಿಶ್ಚನ್ ಎಂಬ ಸತ್ಯ ಬೆಳಕಿಗೆ ಬಂದಿದೆ.

ಕಾನೂನು ತಿಳುವಳಿಕೆ ಇಲ್ಲದ ಕಾರಣ ಯುವತಿ ತಡವಾಗಿ ದೂರು ಸಲ್ಲಿಸಿದ್ದು, ದೂರಿನಲ್ಲಿ ತನ್ನ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಆರೋಪಿ ಬ್ಲಾಕ್‌ಮೇಲ್ ಮಾಡಲು ಯತ್ನಿಸಿದ್ದ ಎಂಬುದಾಗಿ ತಿಳಿಸಿದ್ದಾಳೆ.
ಬಳಿಕ ತನ್ನ ಹಿತೈಷಿಗಳ ನೆರವಿನಿಂದ ಎಲ್ಲಾ ಸಾಕ್ಷ್ಯಾಧಾರಗಳನ್ನು ಪಾಂಡೇಶ್ವರ ಠಾಣೆಗೆ ನೀಡಿದ್ದು ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾಳೆ.


ಈ ಪ್ರಕರಣದಲ್ಲಿ ವಿಟ್ಲ ಭಾಗದ ಹಿಂದೂ ಜಾಗರಣ ವೇದಿಕೆ ಮತ್ತು ಮಂಗಳೂರು ಗ್ರಾಮಾಂತರ ಜಿಲ್ಲೆ ಪ್ರಮುಖರು ಹಸ್ತಕ್ಷೇಪ ಮಾಡಿದ್ದು, ಅವರ ಒತ್ತಾಯದಿಂದ ಮಂಗಳೂರಿನಲ್ಲಿ ಮೊದಲು ಎಫ್‌ಐಆರ್ ದಾಖಲಾಯಿತು. ಆದರೆ ಘಟನೆ ಬೆಂಗಳೂರಿನಲ್ಲಿ ನಡೆದ ಹಿನ್ನೆಲೆ, ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸಲಾಯಿತು.

ತನಿಖೆಯ ಭಾಗವಾಗಿ ಮಾಗಡಿ ಪೊಲೀಸರು ಕ್ರಮ ಕೈಕೊಂಡಿದ್ದು ಸದ್ಯ ಆರೋಪಿ ಪೊಲೀಸ್‌ ವಶವಾಗಿದ್ದಾನೆ.
ಹೋರಾಟಕ್ಕೆ ಶ್ರಮಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಬಂಟ್ವಾಳ ಎಂಎಲ್ಎ ರಾಜೇಶ್ ನಾಯ್ಕ್ ಹಾಗೂ ಬಲವಾದ ಸ್ಫೂರ್ತಿದಾಯಕವಾಗಿ ಸಹಕಾರ ನೀಡಿದ ಹಿಂದೂಜಾಗರಣ ವೇದಿಕೆಯ ಪ್ರಾಂತ ವಕೀಲರಾದ ಕಿಶೋರ್ ಕುಮಾರ್ ರೈ ಹಾಗೂ ಎಲ್ಲ ಸಹಾಯಕರಿಗೆ ಯುವತಿ ಕೃತಜ್ಞತೆ ಸಲ್ಲಿಸಿದ್ದಾಳೆ.

ಪೊಲೀಸರ ಕಾರ್ಯಾಚರಣೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *