Breaking
22 Jul 2026, Wed

ಬೆಳ್ತಂಗಡಿ: ದ್ವಿಚಕ್ರ ವಾಹನಗಳ ಡಿಕ್ಕಿ; ಓರ್ವ ಸವಾರ ಗಂಭೀರ, ಮತ್ತೋರ್ವನಿಗೆ ಗಾಯ

ಬೆಳ್ತಂಗಡಿ: ಕಕ್ಕಿಂಜೆ–ಅಣಿಯೂರು ಮುಖ್ಯರಸ್ತೆಯ ಬಯಲು ಶಾಲೆ ಸಮೀಪ ಮಂಗಳವಾರ (ಜು. 21) ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಮತ್ತೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೀಜದಡಿ ನಿವಾಸಿ ಬಾಲಣ್ಣ ಗಂಭೀರವಾಗಿ ಗಾಯಗೊಂಡವರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಣಿಯೂರಿನಿಂದ ಬಯಲು ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಬಯಲು ದಡ್ಡು ನಿವಾಸಿ ಗಣೇಶ್ ಅವರ ಬೈಕ್‌ಗೆ, ಬಯಲು ಶಾಲೆ ರಸ್ತೆಯಿಂದ ಸ್ಕೂಟರ್‌ನಲ್ಲಿ ಬರುತ್ತಿದ್ದ ಬಾಲಣ್ಣ ಅವರ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಣೇಶ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *