ಮಂಗಳೂರು: ನವಚೇತನ ಸೇವಾ ಬಳಗ (ರಿ.) ತೋಡಾರು ಇದರ ಸದಸ್ಯರಾದ ಪ್ರಶಾಂತ ಅಂಚನ್ ಮಸ್ಕತ್ ಹಾಗೂ ರಕ್ಷಿತ್ ಮುನ್ನ ಮಲ್ಪೆ ಇವರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವ ಶ್ರೀ ವಿಜಯಶೇಖರ ಕರ್ಕೇರ (65ವರ್ಷ) ಕಲ್ಯಾಣಪುರ ಇವರ ಚಿಕಿತ್ಸೆಗೆ ಧನ ಸಹಾಯ ಮಾಡಿದರು.
ವಿಜಯಶೇಖರ ಕರ್ಕೇರ ಇವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಸೆಪ್ಟಿಸೆಮಿಯಾ ಜೊತೆಗೆ ನರರೋಗದಿಂದ ಬಳಲುತಿದ್ದು ಕಡು ಬಡವರರಾಗಿದ್ದು,ಅವರ ಚಿಕಿತ್ಸೆಗೆ ಪ್ರಶಾಂತ ಅಂಚನ್ ಮಸ್ಕತ್ ಹಾಗೂ ರಕ್ಷಿತ್ ಮುನ್ನ ಮಲ್ಪೆ 10,000 ಧನ ಸಹಾಯ ಹಸ್ತ ನೀಡಿದರು.



