ಸಜೀಪ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೌರ್ಣಮಿಯ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಕಥಾ ಪೂಜೆಯು ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕ ಗಣಪತಿ ಮಹಾಬಲೇಶ್ವರ ಭಟ್. ಕೆ, ರಾಧಾಕೃಷ್ಣ ಆಳ್ವ, ಹರೀಶ್ ಬಂಜೇರ, ಶಂಕರ ಪೂಜಾರಿ, ಶುಭಾಷ್ ಶೆಟ್ಟಿ, ಸುರೇಶ್ ಬಂಗೇರ, ರಾಮ ಬರೆ, ಪ್ರದೀಪ್ ಭಂಡಾರಿ, ಕಿಶನ್ ಸೇಣವ ಮೊದಲಾದವರು ಉಪಸ್ಥಿತರಿದ್ದರು. ಹಾಗೂ ಹನುಮ ಜಯಂತಿಯ ಅಂಗವಾಗಿ ದೇವರಿಗೆ ವಿಶೇಷ ಸೇವ ಪೂಜೆಯು ನಡೆಯಿತು.






