ಬಂಟ್ವಾಳ: ನಾಗೇಶ್ ಬೆಳ್ಳಾರೆ ನೇತೃತ್ವದ ಕಲಾತ್ಮಕ ಜಗತ್ತು ಆಯೋಜನೆಯ ʼ ನಾರಿ ನಿನಗೊಂದು ಸಾರಿ ಫೋಟೋ ಸ್ಪರ್ಧೆ -2026 ಯಶಸ್ವಿಯಾಗಿ ನಡೆದಿದ್ದು ಇದರ ಫಲಿತಾಂಶ ಪ್ರಕಟಗೊಂಡಿದೆ.

ಈ ಸ್ಪರ್ಧೆಯ ತೀರ್ಪುಗಾರಿಕೆಯನ್ನು ದೂರದರ್ಶನ ಚಂದನ ವಾಹಿನಿಯ ನಿರೂಪಕಿ ಚೈತ್ರ ರಾಜೇಶ್ ಕೋಟ ವಹಿಸಿಕೊಂಡಿದ್ದರು.

ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪ್ರೀತಿ ಶ್ರೀಧರ್ ಹಾಗೂ ದ್ವಿತೀಯ ಸ್ಥಾನವನ್ನು ಸೌಮ್ಯ ಬಜ್ಪೆ ಪಡೆದುಕೊಂಡಿದ್ದಾರೆ.

ಮಕ್ಕಳ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ದಕ್ಷಿ ಪಿಕೆ ಉಜಿರೆ ಹಾಗೂ ದ್ವಿತೀಯ ಸ್ಥಾನವನ್ನು ಅಹ್ನಾ ಯು ಪಡೆದುಕೊಂಡಿದ್ದಾರೆ.
ಮಕ್ಕಳ ಸ್ಪರ್ಧೆಯಲ್ಲಿ 2 ವಿಭಾಗವನ್ನು ಮಾಡಲಾಗಿದ್ದು ಇದರ ಫಲಿತಾಂಶವನ್ನು ಫೆ.26ರಂದು ಪ್ರಕಟಿಸಲಾಗುವುದು ಎಂದು ಸಂಸ್ಥಾಪಕರಾದ ನಾಗೇಶ್ ಬೆಳ್ಳಾರೆ ತಿಳಿಸಿದ್ದಾರೆ.







