ಬಂಟ್ವಾಳ: ಪಾಣೆಮಂಗಳೂರಿನ ಭಯಂಕರೇಶ್ವರ ದೇವಸ್ಥಾನದಲ್ಲಿ ನಡೆದಂತ ಕಥಾ ಬಿಂದು ಸಾಹಿತ್ಯ ಸಂಭ್ರಮ 2026 ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ “ಕನ್ನಡ ರತ್ನ ಪ್ರಶಸ್ತಿ”ಪ್ರದಾನ ಸಮಾರಂಭವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿಯ ಕೃಷಿ ತಜ್ಞರಾದ ಡಾಕ್ಟರ್ ಜೋಸೆಫ್ ಲೋಬೋ, ಮೈಸೂರಿನ ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ನಿರಾಶ್ರಿತರು ಮತ್ತು ವೃದ್ಧರ ಬೃಂದಾನ ಆಶ್ರಮದ ಅಧ್ಯಕ್ಷರಾದ ಯಾದವ ಹರೀಶ್ ಹೆಚ್. ಎ. ಮೈಸೂರಿನ ಒಂದು ಹೆಜ್ಜೆ ರಕ್ತದಾನಿ ಗಳ ಬಳಗದ ಅಧ್ಯಕ್ಷರಾದ ಹಾಗೂ PGRSS ಸಂಸ್ಥೆಯ ಸಂಚಲಕರಾದ ರಕ್ತದಾನಿ ಮಂಜು, ಅನಿಲ್ , ಕುಮಾರಿ ಆರ್ನಾ ಎಸ್ ಭಟ್ ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.




