Breaking
23 Mar 2026, Mon

ಕರುನಾಡು ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ : ಪ್ರಥಮ ಆರ್ಥಿಕ ನೆರವು ಹಸ್ತಾಂತರ

ಬಂಟ್ವಾಳ: ಸೇವಾ ಮನೋಭಾವನೆಯನ್ನು ಗುರಿಯಾಗಿಸಿಕೊಂಡು ನೂತನವಾಗಿ ಆರಂಭಗೊಂಡ ಕರುನಾಡು ಚಾರಿಟೇಬಲ್ ಟ್ರಸ್ಟ್(ರಿ.) ಕರ್ನಾಟಕ ತನ್ನ ಮೊದಲ ಸೇವಾರೂಪದ ಆರ್ಥಿಕ ನೆರವನ್ನು ಅಶಕ್ತ ಕುಟುಂಬಕ್ಕೆ ಹಸ್ತಾಂತರಿಸಿದೆ.

ಗಂಟಲು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಮೂಡುಬಿದಿರೆ ತಾಲೂಕಿನ ದರ್ಖಾಸು ಮನೆ ನೆಲ್ಲಿಕಾರು ಗ್ರಾಮದ ಗೋಪಿ ಇವರ ಮಗನಾದ ಗಿರೀಶ್ ಕೆ ಇವರ ಚಿಕಿತ್ಸೆಗೆ ನ.30ರಂದು ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ 10ಸಾವಿರ ರೂಪಾಯಿಯ ಆರ್ಥಿಕ ನೆರವಿನ ಚೆಕ್‌ ಹಸ್ತಾಂತರಿಸಲಾಯಿತು.

ಈ ಸಮಯದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *