ಬಂಟ್ವಾಳ: 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ದ. ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿ ದಿ. ಬೈರ ಪಂಡಿತ್ ನಾಟಿ ವೈದ್ಯಾಲಯದ ನಾಟಿ ವೈದ್ಯ ಸೋಮನಾಥ ಪಂಡಿತ್ ಅವರು ಆಯ್ಕೆಯಾಗಿದ್ದಾರೆ.

ಆಯುರ್ವೇದ ನಾಟಿ ವೈದ್ಯರಾಗಿ ಹೆಸರುವಾಸಿಯಾದ ಇವರು ದಿ. ಬೈರ ಪಂಡಿತ್ ರವರ ಮಗನಾಗಿದ್ದು, ಆಯುರ್ವೇದ ಕ್ಷೇತ್ರದಲ್ಲಿ ಪರಂಪರಾಗತವಾಗಿ ನಾಟಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.




