Breaking
23 Mar 2026, Mon

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಭೀಮ ಘರ್ಜನೆ ಇದರ ಕಾರ್ಕಳ ತಾಲೂಕು ಸಂಘಟನಾ ಸಂಚಾಲಕರಾದ ಆನಂದ ನಕ್ರೆ ನಿಧನ

ಕಾರ್ಕಳ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಭೀಮ ಘರ್ಜನೆ ಇದರ ಕಾರ್ಕಳ ತಾಲೂಕು ಸಂಘಟನಾ ಸಂಚಾಲಕರಾದ ಆನಂದ ನಕ್ರೆ (52)ಇವರು ಅನಾರೋಗ್ಯದಿಂದ ಅ.26 ರಂದು ನಿಧನರಾಗಿದ್ದಾರೆ.

ಆನಂದ ನಕ್ರೆ ಅವರು ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ರವಿವಾರ ಮೃತಪಟ್ಟಿದ್ದಾರೆ. ಆನಂದ ನಕ್ರೆ ಅವರು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಆಟೋ ಚಾಲಕರಾಗಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *