ಕಾಸರಗೋಡು: ಶಾಲೆಗೆ ಹೋಗಿದ್ದ ವಿದ್ಯಾರ್ಥಿ ಮನೆಗೆ ಬಾರದೇ ನಾಪತ್ತೆಯಾದ ಘಟನೆ ಕಾಸರಗೋಡುವಿನ ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಂಗಾಡ್ ಪುದಿಯ ಕಂಡತ್ತಿಲ್ ರಹಮಾನ್ ಎಂಬವರ ಪುತ್ರ ಅಬ್ದುಲ್ ವಾಸಿದ್(14) ನಾಪತ್ತೆಯಾದ ವಿದ್ಯಾರ್ಥಿಯಾಗಿದ್ದಾನೆ.

ಈತ ಅ.14 ರಂದು ಬೆಳಗ್ಗೆ ಮನೆಯಿಂದ ಶಾಲೆಗೆಂದು ಹೋಗಿದ್ದು ಹಿಂತಿರುಗಿಲ್ಲ. ಈ ಬಗ್ಗೆ ಮಾಹಿತಿ ಲಭಿಸಿದರೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡುವಂತೆ ಪೋಷಕರರು ಮನವಿ ಮಾಡಿದ್ದಾರೆ




