ಬಂಟ್ವಾಳ: ದಸರಾ ಸಂದರ್ಭದಲ್ಲಿ ವಿಶೇಷ ವೇಷ ಧರಿಸಿ ನಿಧಿ ಸಂಗ್ರಹ ಮಾಡಿ ಬಳಿಕ ಅಶಕ್ತ ಕುಟುಂಬಕ್ಕೆ ನೆರವು ನೀಡುವ ಟೀಮ್ S.M.Y.S ಕಂದೂರು ಇವರು 2ನೇ ವರ್ಷವೂ ತಮ್ಮ ಸೇವಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಈ ಬಾರಿಯೂ ಸಂಗ್ರಹವಾದ ಹಣವನ್ನು ಅ.05ರಂದು ಅನಾರೋಗ್ಯದಿಂದ ಬಳಲುತ್ತಿರುವ ಹಲವಾರು ಬಡ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.
ಈ ಸಂದರ್ಭದಲ್ಲಿ S.M.Y.S ಕಂದೂರಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.




