ಬಂಟ್ವಾಳ: ಉಡುಪಿ – ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣದ ಸಂತ್ರಸ್ತ ರೈತರ ಸಭೆಯು ಬಂಟ್ವಾಳ ಪ್ರವಾಸಿ ಬಂಗಲೆಯಲ್ಲಿ ಇಂದು (ಆ.23) ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲು ಗುತ್ತು , ಜಿಲ್ಲಾ ಸಲಹೆಗಾರ ಮುರುವ ಮಹಾಬಲ ಭಟ್ , ತಾಲೂಕು ರೈತರ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್, ರೈತ ಸಂಘದ ಮುಖಂಡರಾದ ರೂಪೇಶ್ ರೈ ಅಲಿಮಾರ್, ವಿನೋದ್ ಭಟ್ ಪಾದೆ ಕಲ್ಲು, ಇಬ್ರಾಹಿಂ ಕಲಿಲ್, ಚಂದ್ರಹಾಸ ಶೆಟ್ಟಿ, ಹೋರಾಟ ಸಮಿತಿಯ ಅಧ್ಯಕ್ಷ ರಾಜೀವಗೌಡ, ಸಂತ್ರಸ್ತ ರೈತರಾದ ಶಾಮ್ ವಿಟ್ಲ, ಕೃಷ್ಣಪ್ರಸಾದ್ ತಂತ್ರಿ , ಅಶೋಕ್. ಜೆ ಸಿಂತಾ. ಮೊದಲಾದವರು ಉಪಸ್ಥಿತರಿದ್ದರು.

ಸಂತ್ರಸ್ತ ರೈತರ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳ ಮೂಲಕ ಅಧಿಕಾರಿಗಳ ಸಭೆ ನಡೆಸಲು ತೀರ್ಮಾನಿಸಲಾಯಿತು.



