Breaking
13 May 2026, Wed

ಉಡುಪಿ : ಕಡಲಿಗಿಳಿದ ನಾಡದೋಣಿ ಮೀನುಗಾರರು

ಉಡುಪಿ: ಕರಾವಳಿಯಲ್ಲಿ ಮುಂಗಾರು ಮಳೆಯಿಂದಾಗಿ ಕೆಲ ಕಾಲ ಸ್ಥಗಿತಗೊಂಡಿದ್ದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಇದೀಗ ಪುನರಾರಂಭವಾಗಿದೆ.

ಕಡಲಿನ ಅಬ್ಬರದ ಕಾರಣದಿಂದ ಮೀನುಗಾರರು ಹಿಂದೆ ಸರಿದಿದ್ದರೆ, ಈಗ ಅವರು ಮತ್ತೆ ಸಮುದ್ರದಲ್ಲಿ ಮೀನು ಹಿಡಿಯಲು ಸಜ್ಜಾಗಿದ್ದಾರೆ.

ಮಳೆಯ ಕಾರಣದಿಂದ ಮೀನು ದರಗಳು ಹೆಚ್ಚಾಗಿದ್ದರೂ, ಈಗ ನಾಡದೋಣಿಗಳ ಪ್ರವೇಶದಿಂದ ಸ್ಥಿತಿ ನಿಧಾನವಾಗಿ ಸರಿಯಾಗುವ ನಿರೀಕ್ಷೆಯಿದೆ.

ಮಳೆಯ ಅಬ್ಬರವೂ ಕೊಂಚ ತನ್ನಗಾಗಿದ್ದರೂ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ.

Leave a Reply

Your email address will not be published. Required fields are marked *