ಸುಳ್ಯದಲ್ಲಿ ಕೊರಗಜ್ಜನ ಕಟ್ಟೆಯಲ್ಲಿ ಬೆಳ್ಳಿ ಮತ್ತು ತಾಮ್ರದ ಮುಟ್ಟಾಳೆ ಕದ್ದು ಪರಾರಿಯಾದ ಕಳ್ಳರು

ಸುಳ್ಯ: ಕೊರಗಜ್ಜನ ಕಟ್ಟೆಯಲ್ಲಿದ್ದ ಬೆಳ್ಳಿ ಮತ್ತು ತಾಮ್ರದ ಮುಟ್ಟಾಳೆ ಕದ್ದು ಕಳ್ಳರು ಪರಾರಿಯಾದ ಘಟನೆ ಸುಳ್ಯದ ಗುತ್ತಿಗಾರಿನ ಚತ್ರಪ್ಪಾಡಿ ಕೊರಗಜ್ಜನ ಕಟ್ಟೆಯಲ್ಲಿ ಮೇ.29 ರಾತ್ರಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ರಾತ್ರಿ ವೇಳೆ ಯಾರೋ ಕಳ್ಳರು ಬಂದು ಬೆಳ್ಳಿ ಮುಟ್ಟಾಳೆ ಮತ್ತು ತಾಮ್ರದ ಮುಟ್ಟಾಳೆ ಕಳವು ಮಾಡಿದ್ದಾರೆ ತಿಳಿದು ಬಂದಿದೆ.

ಈ ಬಗ್ಗೆ ಕೊರಗಜ್ಜ ಸನ್ನಿದಾನದ ಆಡಳಿತ ಮಂಡಳಿ ಸದಸ್ಯರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿಗಳು ಲಭ್ಯವಾಗಿದೆ.

Leave a Reply

Your email address will not be published. Required fields are marked *