ಮಂಗಳೂರು: ಕೆಲ ದಿನಗಳ ಹಿಂದೆ ಬಜ್ಪೆಯಲ್ಲಿ ಜಿಹಾದಿಗಳ ರಕ್ತದಾಹಕ್ಕೆ ಬಲಿಯಾದ, ಹುತಾತ್ಮ ಸುಹಾಸ್ ಶೆಟ್ಟಿ ಅವರ ಹತ್ಯೆಯನ್ನು ಖಂಡಿಸಿ ಹಾಗೂ ಈ ಹತ್ಯಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಗೆ ವಹಿಸುವಂತೆ ಒತ್ತಾಯಿಸಿ”ವಿಶ್ವ ಹಿಂದೂ ಪರಿಷತ್ -ಬಜರಂಗದಳ” ಮಂಗಳೂರುಇದರ ವತಿಯಿಂದ ಇದೇ ಮೇ 25 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ, ಬಜಪೆ ಜಂಕ್ಷನ್ ಬಳಿಯ ಶಾರದಾ ಮಂಟಪದಿಂದ ಬಜಪೆ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸಮಸ್ತ ಹಿಂದೂ ಭಾಂದವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಹಿಂದೂ ಶಕ್ತಿಯನ್ನು ತೋರಿಸೋಣ ಎಂದು ವಿಶ್ವ ಹಿಂದೂ ಪರಿಷತ್ -ಬಜರಂಗದಳ ಮಂಗಳೂರು ಕೋರಿದೆ.


