ಮಂಗಳೂರು: ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ʼಆಪರೇಷನ್ ಸಿಂಧೂರ್ʼ ಈಗಾಗಲೇ ಯಶಸ್ವಿಯಾಗಿದ್ದು ಈ ಹಿನ್ನಲೆ ಮೇ 20 ಮಂಗಳವಾರದಂದು ʼಸಿಂಧೂರ ವಿಜಯೋತ್ಸವʼ ಸಮಿತಿ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ‘ಸಿಂಧೂರ ವಿಜಯೋತ್ಸವ’ ಕಾರ್ಯಕ್ರಮ ನೆರವೇರಲಿದೆ.
ಕರಾವಳಿ ಉತ್ಸವ ಮೈದಾನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನ 3.00 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ.

ಸಂಜೆ 5.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಂಗಳೂರಿನ ಸಿಂಧೂರ್ ವಿಜಯೋತ್ಸವ ಸಮಿತಿ ಪ್ರಕಟಿಸಿದೆ.

