ದೆಹಲಿ: ತುರ್ತು ಪರಿಸ್ಥಿತಿಯಲ್ಲಿ ಬಳಸುವ ಶಬ್ಧ ಅಥವಾ ದೃಶ್ಯಗಳನ್ನು ಟಿವಿ ಚಾನಲ್ ನ ಕಾರ್ಯಕ್ರಮಗಳಲ್ಲಿ ಬಳಸಬಾರದು ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಾದ ನಿರ್ದೇಶನ ಹೊರಡಿಸಿದೆ.
ನಾಗರಿಕರ ಜಾಗೃತಿಗಾಗಿ ನಡೆಸುವ ಅಭಿಯಾನಗಳನ್ನು ಹೊರತುಪಡಿಸಿ ಇತರ ಎಲ್ಲ ಕಾರ್ಯಕ್ರಮಗಳಲ್ಲಿ ಈ ಶಬ್ಧ ಮತ್ತು ದೃಶ್ಯಗಳನ್ನು ಬಳಸುವುದಕ್ಕೆ ಕೇಂದ್ರ ನಿರ್ಬಂಧ ವಿಧಿಸಿದೆ.

ವಾಯುದಾಳಿಯಂತಹ ತುರ್ತು ಸಮಯದಲ್ಲಿ ಬಳಸುವ ಸೈರನ್ ಶಬ್ದ ಮಾಧ್ಯಮಗಳಲ್ಲಿ ಸಾಮಾನ್ಯವಾಗಿಬಿಟ್ಟರೆ, ಜನರಲ್ಲಿ ಗಂಭೀರತೆಗೆ ಸಂಬಂಧಿಸಿದ ಸೂಕ್ಷ್ಮತೆ ಕಡಿಮೆಯಾಗಬಹುದು ಅನ್ನುವ ಕಾರಣಕ್ಕಾಗಿ ಕೇಂದ್ರ ಸರಕಾರ ಮಾಧ್ಯಮಗಳಿಗೆ ಈ ಸೂಚನೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

