ಬಂಟ್ವಾಳ : ಮಾ.೨೨ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಶ್ರೀ ಗುಡ್ಡಚಾಮುಂಡಿ ದೈವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಅಧ್ಯಕ್ಷರಾಗಿ ಪಾಳ್ಯ ಸಚ್ಚಿದಾನಂದ ರೈ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಇಂದಿರಾ ಕೊಂ ಮುತ್ತಪ್ಪ ನಾಯ್ಕ ಮೊಗ್ರೋದಿಪಾಲು, ರಾಜೇಶ್ವರಿ ಕೊಂ ಧನಂಜಯ ಸಾಲಿಯಾನ್ ಅಶ್ವಥಡಿ,ನಾರಾಯಣ ನಾಯ್ಕ ನಡುಪಾಲು, ಸೀತಾರಾಮ ಏನಾಜೆ, ಸಾಂತಪ್ಪ ಮೂಲ್ಯ ಏನಾಜೆ,ಕೆ.ಜಿ.ರವೀಂದ್ರ ರೈ ಮಂಜೊಟ್ಟಿ, ಸುಂದರ ಗೌಡ ಮಂಜೊಟ್ಟಿ ಇವರನ್ನು ನೇಮಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಹಾಗೂ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಯ ಆಯುಕ್ತರು ಆದೇಶ ನೀಡಿದ್ದಾರೆ.



